ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ರಾಜ್ಯಮಟ್ಟದ ಸಹೃದಯ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜನವರಿ 5 , 2016
|
ಜನವರಿ 5, 2016
|
ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ರಾಜ್ಯಮಟ್ಟದ ಸಹೃದಯ ಪ್ರಶಸ್ತಿ
ಸಾಗರ :
ಯಕ್ಷಗಾನ ಚಿಂತಕ, ಲೇಖಕ ಮಣಿಪಾಲದ ಎಂ. ಐ. ಟಿ ಕಾಲೇಜಿನ ಪ್ರಾಧ್ಯಾಪಕ ಪ್ರೋ. ಎಸ್. ವಿ. ಉದಯ ಕುಮಾರ ಶೆಟ್ಟರಿಗೆ ರಾಜ್ಯ ಮಟ್ಟದ ಸಹೃದಯ ಪ್ರಶಸ್ತಿಯನ್ನು ಸಾಗರದಲ್ಲಿ ನಡೆದ ಸಾಗರೋತ್ಸವ ಸಮಾರಂಬದಲ್ಲಿ ವಿಧಾನ ಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರು ಪ್ರದಾನ ಮಾಡಿದರು. ಹಿರಿಯ ಸಾಹಿತಿ ನಾ. ಡಿಸೋಜ ಅಭಿನಂದನಾ ಬಾಷಣ ಮಾಡಿದರು. ಕೆಳದಿ ಸಂಸ್ಥಾನದ ರಾಜಗುರು ಡಾ/ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನೀದ್ಯ ವಹಿಸಿದ್ದರು. ಶ್ರೀ ಎಂ. ಕೆ. ಶ್ರೀರಂಗಯ್ಯ ಜಿಲ್ಲಾದಿಕಾರಿಗಳು ಚಿತ್ರದುರ್ಗ, ಶ್ರೀ ಸಿಗಂದೂರು ಕ್ಷೇತ್ರದ ದರ್ಮದರ್ಶಿ ಸಿಗಂದೂರು ರಾಮಪ್ಪ, ಅರ್ಚಕ ಶೇಷಗಿರಿ ಭಟ್ ಮುಂತಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರಾಜ್ಯದ ವಿವಿದ ಜಿಲ್ಲೆಗಳ ಹತ್ತು ಜನ ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಯಕ್ಷಗಾನ ಕ್ಷೇತ್ರದಿಂದ ಶೆಟ್ಟರಿಗೆ ಈ ಪ್ರಶಸ್ತಿ ಸಂದಿತ್ತು. ಸಹೃದಯ ಬಳಗದ ಅದ್ಯಕ್ಷ ಜಿ. ನಾಗೇಶ್ ಸ್ವಾಗತಿಸಿದರು. ವಿವಿದ ಜಿಲ್ಲೆಗಳ ಕಲಾವಿದರಿಂದ ಭರತ ನಾಟ್ಯ, ವಿನೋದಾವಳಿ ನಗೆಹಬ್ಬ ನೆರವೇರಿತು. ಸಹಸ್ರಾರು ಪ್ರೇಕ್ಷಕರು ಭಾಗವಹಿಸಿದ್ದರು . ಸಾಗರ ಸುತ್ತ ಪತ್ರಿಕಾ ಬಳಗ ಕಾರ್ಯಕ್ರಮ ಸಂಘಟಿಸಿತ್ತು.
|
|
|